ದ್ವಾರಕೀಶ್ ಚಿತ್ರ ಲಾಂಛನದಲ್ಲಿ ದ್ವಾರಕೀಶ್ ಅವರು ನಿರ್ಮಿಸುತ್ತಿರುವ ‘ಚಾರುಲತಾ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
ಕಿಚ್ಚ ಸುದೀಪ್ ಅಭಿನಯದ ‘ವಿಷ್ಣುವರ್ಧನ ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ಪಿ.ಕುಮಾರ್ ‘ಚಾರುಲತಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ.
ಕನ್ನಡದ ಹುಡುಗ ಸ್ಕಂದ ಈ ಚಿತ್ರದ ನಾಯಕ. ಖ್ಯಾತ ನಟಿ ಪ್ರಿಯಾಮಣಿ ನಾಯಕಿ. ಶರಣ್ಯ, ಸೀತಾ, ರವಿಶಂಕರ್, ಮಾ||ಮಂಜುನಾಥ್, ಸುನೇತ್ರ, ಸುದರ್ಶನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರು.
ಸುಂದರ್ ಸಿ ಬಾಬು ಸಂಗೀತ ನೀಡಿರುವ ‘ಚಾರುಲತಾಗೆ ಪನ್ನೀರ್ಸೆಲ್ವಂ ಅವರ ಛಾಯಾಗ್ರಹಣವಿದೆ. ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಬಿಕೆರೆ ಕಲಾ ನಿರ್ದೇಶನ ಹಾಗೂ ಸುರೇಶ್ರಾಜ್ ಸಹನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ.